ದೇಸ್ ರಾಜ್ ಗೋಯಲ್ (1929-2013), ದೇಸ್ರಾಜ್ ಗೋಯಲ್ ಅಥವಾ ಡಿಆರ್ ಗೋಯಲ್ ಎಂದೂ ಕರೆಯುತ್ತಾರೆ, ಅವರು ಭಾರತೀಯ ಪತ್ರಕರ್ತರು, ಲೇಖಕರು, ಶೈಕ್ಷಣಿಕ ಮತ್ತು ಜಾತ್ಯತೀತತೆ ಮತ್ತು ಕೋಮುವಾದದ ಮೇಲೆ ಬರೆದ ಪುಸ್ತಕಗಳಿಂದಾಗಿ ಪ್ರಸಿದ್ಧರದವರು. ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ () ನ ಸದಸ್ಯರಾಗಿದ್ದ ಇವರು 1979 ರಲ್ಲಿ ಸಂಘಟನೆಯ ಕುರಿತು ಒಂದು ಮೂಲ ಪುಸ್ತಕವನ್ನು ಬರೆದರು, ಇದನ್ನು ಶೈಕ್ಷಣಿಕ ಕೃತಿಗಳಲ್ಲಿ ವ್ಯಾಪಕವಾಗಿ ಉಲ್ಲೇಖಿಸಲಾಗಿದೆ. == ಜೀವನ ಮತ್ತು ವೃತ್ತಿ == ದೇಸ್ ರಾಜ್ ಗೋಯಲ್ ಅವರು 1929 ರಲ್ಲಿ ಪಂಜಾಬ್‌ನ ಮೊಗಾದಲ್ಲಿ ಜನಿಸಿದರು. ಗೋಯಲ್ 1942 ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಆರ್‌ಎಸ್‌ಎಸ್ ನ ಸ್ವಯಂಸೇವಕರು. ಇದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಸ್ಥೆ ಎಂಬ ನಂಬಿಕೆಯೊಂದಿಗೆ ಅದನ್ನು ಸೇರಿಕೊಂಡರು ಮತ್ತು ಪೂರ್ಣ ಸಮಯದ ಪ್ರಚಾರಕರಾಗಿ ಕೆಲಸ ಮಾಡಿದರು. ಸಂಘಟನೆಯ ಬಗ್ಗೆ ಭ್ರಮನಿರಸನಗೊಂಡು 1947 ರಲ್ಲಿ ಅದನ್ನು ತೊರೆದರು. ಸಂಘದ ತಮ್ಮ ಸಂಪರ್ಕವನ್ನು ವಿಶ್ಲೇಷಣೆ ಮಾಡುತ್ತಾ ಮುಂದುವರೆಸಿದರು. 1979 ರಲ್ಲಿ ಅದರ ಬಗ್ಗೆ ಒಂದು ಪುಸ್ತಕವನ್ನು ಸಹ ಪ್ರಕಟಿಸಿದರು, ಇದು ಶಿಕ್ಷಣತಜ್ಞರಿಂದ ವಿಶ್ಚಾಸಾರ್ಹವೆಂದು ಪರಿಗಣಿಸಲ್ಪಟ್ಟಿದೆ. ಗೋಯಲ್ 1946 ರಿಂದ ಪತ್ರಕರ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದರು, ಉರ್ದು ಸಾಪ್ತಾಹಿಕ ಸಂದೇಶ್, ಉರ್ದು ದಿನಪತ್ರಿಕೆ ಸಂಗ್ರಾಮ್ ಮತ್ತು ಹಿಂದೂ ದೈನಿಕ ಮಿಲಾಪ್ ಸೇರಿದಂತೆ ಹಲವಾರು ಪ್ರಕಟಣೆಗಳೊಂದಿಗೆ ಸಂಬಂಧ ಹೊಂದಿದ್ದರು. ಮಿಲಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ದೆಹಲಿಯ ಹಿಂದೂ ಮಹಾಸಭಾ ಭವನದಲ್ಲಿ ಪರಿಚಯಸ್ಥರು ಇವರಿಗೆ 1948 ರ ಜನವರಿ 30 ರಂದು ಗಾಂಧಿಯವರ ಪ್ರಾರ್ಥನಾ ಸಭೆಗೆ ಹೋಗುವಂತೆ ಹೇಳಿದರು ಏಕೆಂದರೆ "ಐತಿಹಾಸಿಕ ಏನಾದರೂ ಸಂಭವಿಸಲಿದೆ" ಎಂಬ ಸುಳಿವು ಕೊಟ್ಟರು. ಅವರು ಸಭೆಗೆ ಬರುವಷ್ಟರಲ್ಲಿ ಗಾಂಧಿಯವರು ಹತ್ಯೆಗೀಡಾಗಿದ್ದರು . ತರುವಾಯ, ಜವಾಹರಲಾಲ್ ನೆಹರು ಹತ್ಯೆಯ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಗೋಯಲ್ ಅವರನ್ನು ಬಂಧಿಸಲಾಯಿತು. ಜೈಲಿನಲ್ಲಿದ್ದಾಗ, ಅವರು ಜೈಲು ಗ್ರಂಥಾಲಯದಿಂದ ಎರವಲು ಪಡೆದ ವಿವಿಧ ಪುಸ್ತಕಗಳನ್ನು ಓದಿದರು, ಅದು ಅವರ ಪ್ರಪಂಚಿಕ ಜ್ಯಾನವನ್ನು ವಿಸ್ತರಿಸಿತು ಮತ್ತು ಆರ್‌ಎಸ್‌ಎಸ್‌ ಪ್ರಭಾವದಿಂದ ಹೊರಬರಲು ಸಹಾಯ ಮಾಡಿತು. ಆರ್‌ಎಸ್‌ಎಸ್‌ ಚಿಂತನೆಯಿಂದ ಭಿನ್ನವಾದ ಸಂಘಟನೆಯನ್ನು ಹುಡುಕಲು ನಿರ್ಧರಿಸಿದರು, ಆದರೆ ಕಾಂಗ್ರೆಸ್‌ಅನ್ನು ವಿರೂಧಿಸುವ ಭರದಲ್ಲಿ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು. ಗೋಯಲ್ ಅವರು 1956 ಮತ್ತು 1963 ರ ನಡುವೆ ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು 1962 ರ ಭಾರತ-ಚೀನಾ ಯುದ್ಧದ ನಂತರ ನೆಹರೂ ವಿರುದ್ಧ ಗೋಲ್ವಾಲ್ಕರ್ ಅವರ ವ್ಯಚಾರಿಕ ಭಿನ್ನತೆಯನ್ನು ಗಮನಿಸಿದ ನಂತರ ಇನ್ನಷ್ಟು ಕ್ರಿಯಾಶೀಲರಾದರು. ಸ್ವಾತಂತ್ರ್ಯ ಹೋರಾಟದಿಂದ ದೂರವಿರಲು ಗೋಲ್ವಾಲ್ಕರ್ ಅವರಿಗೆ ಯಾವುದೇ ಸಮಸ್ಯೆಗಳಿಲ್ಲದಿದ್ದರೂ ಈಗ ನೆಹರೂ ವಿರೋಧಿವನ್ನು ದೇಶಭಕ್ತಿಯೊಂದಿಗೆ ತುಲನೆ ಮಾಡುತ್ತಿರುವುದು ಅವರಿಗೆ ವಿಚಿತ್ರವಾಗಿ ಕಂಡುಬಂದಿತು. ಜಬಲ್ಪುರದ ಸಂಸತ್ ಸದಸ್ಯರಾದ ಸುಭದ್ರಾ ಜೋಶಿ ಅವರೊಂದಿಗೆ ಜಂಟಿಯಾಗಿ, ಅವರು ಸಂಪ್ರದಾಯಿಕ್ತ ವಿರೋಧಿ ಸಮಿತಿ (ಮತೀಯ ವಿರೋಧಿ ಸಮಿತಿ) ಸ್ಥಾಪಿಸಿದರು. ನಂತರ ಅದನ್ನು ಕ್ವಾಮಿ ಏಕತಾ ಟ್ರಸ್ಟ್ (ರಾಷ್ಟ್ರೀಯ ಏಕತಾ ಟ್ರಸ್ಟ್) ಎಂದು ಮರುನಾಮಕರಣ ಮಾಡಲಾಯಿತು. ಇದು ಭಾರತದಲ್ಲಿನ ಅಂತರ-ಧರ್ಮದ ಸಂವಾದ ಮತ್ತು ಕೋಮು ಸೌಹಾರ್ದತೆಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಸೆಕ್ಯುಲರಿ ಡೆಮಾಕ್ರಸಿ ನಿಯತಕಾಲಿಕವನ್ನು ಪ್ರಕಟಿಸುತ್ತದೆ. ಗೋಯಲ್ ಅವರು 1963 ರಿಂದ 1967 ರವರೆಗೆ ಮುಖ್ಯವಾಹಿನಿಯ ವಾರಪತ್ರಿಕೆಯ ಸಂಪಾದಕರಾಗಿದ್ದರು ಮತ್ತು 1968 ರಿಂದ ಸೆಕ್ಯುಲರ್ ಡೆಮಾಕ್ರಸಿಯ ಸಂಪಾದಕರಾಗಿದ್ದರು. ಗೋಯಲ್ 4 ಫೆಬ್ರವರಿ 2013 ರಂದು ನಿಧನರಾದರು == ಸಾಧನೆ == ಕಾಶ್ಮೀರ ( & ಪಬ್ಲಿಷಿಂಗ್ ಹೌಸ್, 1965), B0007JARPM , ಉಗ್ರಗಾಮಿ ಕೋಮುವಾದದ ಬುಡ ( ಮಾಹಿತಿ ಮತ್ತು ಪ್ರಸಾರ ಸಚಿವಾಲಯ, 1975), B0007BYECC ದಿ ಈಗಲ್ ಡೆಮಾಕ್ರಸಿ (ಕಲಂಕಾರ್ ಪ್ರಕಾಶನ, 1976), B002H9BK1A ರಾಷ್ಟ್ರೀಯ ಸ್ವಯಂಸೇವಕ ಸಂಘ (ರಾಧಾ ಕೃಷ್ಣ ಪ್ರಕಾಶನ, 1979), , ಎರಡನೇ ಆವೃತ್ತಿ (2000), . ಕೋಮುವಾದ ವಿರುದ್ಧ ರಾಷ್ಟ್ರೀಯತೆ: ನೆಹರು ಅಪ್ರೋಚ್ (ಸಂಪ್ರದಾಯಿಕ್ತ ವಿರೋಧಿ ಸಮಿತಿ, 1984), OL17859333M. ಅಫ್ಘಾನಿಸ್ತಾನ್: ಬಿಹೈಂಡ್ ದಿ ಸ್ಮೋಕ್ ಸ್ಕ್ರೀನ್ (ಅಜಂತಾ ಪಬ್ಲಿಕೇಷನ್ಸ್, 1984), , B005Z4XAXA. ಅಲೈನ್ಮೆಂಟ್: ಕಾನ್ಸೆಪ್ಟ್ಸ್ ಮತ್ತು ಕನ್ಸರ್ನ್ಸ್ (ದಕ್ಷಿಣ ಏಷ್ಯಾ ಬುಕ್ಸ್, 1986), ಪರಮಾಣು ನಿಶ್ಯಸ್ತ್ರೀಕರಣ: ಆರು ರಾಷ್ಟ್ರಗಳ ಉಪಕ್ರಮ ಮತ್ತು ದೊಡ್ಡ ಶಕ್ತಿಯ ಪ್ರತಿಕ್ರಿಯೆ (ಸ್ಟರ್ಲಿಂಗ್, 1987), ಕಹಾನಿ ಜವಾಹರಲಾಲ್ ಕಿ ("ಜವಾಹರಲಾಲ್ ಕಥೆ", ಹಿಂದಿಯಲ್ಲಿ, 2000), . ಮೌಲಾನಾ ಹುಸೇನ್ ಅಹ್ಮದ್ ಮದ್ನಿ - ಎ ಬಯೋಗ್ರಾಫಿಕಲ್ ಸ್ಟಡಿ (ಅನಾಮಿಕಾ ಪಬ್ಲಿಷರ್ಸ್, 2004), == ಆತಿಥ್ಯೆ == ಇತಿಹಾಸಕಾರ ರಾಮಚಂದ್ರ ಗುಹಾ ಅವರು ಗೋಯಲ್ ಅವರ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು "ಆರ್‌ಎಸ್‌ಎಸ್‌ನ ಅತ್ಯುತ್ತಮ ಪುಸ್ತಕ" ಎಂದು ಕರೆದಿದ್ದಾರೆ. ಲಾಯ್ಡ್ . ರುಡಾಲ್ಫ್ ಇದನ್ನು "ವಿವಾದಾತ್ಮಕವಾಗಿ ವಿಮರ್ಶಾತ್ಮಕ ಕೆಲಸ" ಎಂದು ಕರೆದರು ಮತ್ತು ಗಾಗಿ 3 ಅತ್ಯುತ್ತಮ ಉಲ್ಲೇಖಗಳಲ್ಲಿ ಇದನ್ನು ಸೇರಿಸಿದರು. == ಬಾಹ್ಯ ಕೊಂಡಿಗಳು == ಮುಖ್ಯವಾಹಿನಿ ವಾರಪತ್ರಿಕೆ ಸೆಕ್ಯುಲರ್ ಡೆಮಾಕ್ರಸಿ ಮ್ಯಾಗಜೀನ್ 2014-10-29 ವೇಬ್ಯಾಕ್ ಮೆಷಿನ್ ನಲ್ಲಿ. ಸಂಪ್ರದಾಯಿಕ ವಿರೋಧಿ ಸಮಿತಿಯ ಪುಸ್ತಕಗಳು ಸಂಪ್ರದಾಯವಾದಿ ವಿರೋಧಿ ಆಂದೋಲನದ ಸಂಕ್ಷಿಪ್ತ ಇತಿಹಾಸ == ಉಲ್ಲೇಖಗಳು ==